ಶ್ರೀಶೈಲೇಂದ್ರ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶೈಲೇಂದ್ರ ಬಾಬು ಅವರು ನಿರ್ಮಿಸುತ್ತಿರುವ ‘ಆಟ ಚಿತ್ರಕ್ಕಾಗಿ ವಿ.ನಾಗೇಂದ್ರಪ್ರಸಾದ್ ಬರೆದಿರುವ ‘ರಾಮ ರಾಮ ನನ್ನ ಬಿಲ್ಲು ಎಂದು ಆರಂಭವಾಗುವ ಹಾಡಿನ ಚಿತ್ರೀಕರಣ ಅಬ್ಬಾಯಿನಾಯ್ಡು ಸ್ಟುಡಿಯೋದಲ್ಲಿ ನಿರ್ಮಿಸಲಾಗಿದ್ದ ಅದ್ದೂರಿ ಸೆಟ್ನಲ್ಲಿ ನಡೆದಿದೆ. ಸುಮಂತ್ ಹಾಗೂ ವಿಭಾನಟರಾಜನ್ ಅಭಿನಯಿಸಿದ ಈ ಗೀತೆಗೆ ಗಣೇಶ್ ನೃತ್ಯ ನಿರ್ದೇಶನ ಮಾಡಿದ್ದಾರೆ.
ಮೂರು ಹಾಡುಗಳ ಚಿತ್ರೀಕರಣ ಬಾಕಿಯಿದ್ದು, ವಿದೇಶದಲ್ಲಿ ಈ ಹಾಡುಗಳ ಚಿತ್ರೀಕರಣ ನಡೆಯಲಿದೆ ಎಂದು ನಿರ್ದೇಶಕ ವಿಜಯಕುಮಾರ್ ತಿಳಿಸಿದ್ದಾರೆ. ಚಿತ್ರತಂಡ ಸದ್ಯದಲ್ಲೇ ವಿದೇಶಕ್ಕೆ ಪಯಣಿಸಲಿದೆ.
ನಿರ್ಮಾಪಕ ಶೈಲೇಂದ್ರ ಬಾಬು ಅವರ ಪುತ್ರ ಸುಮಂತ್ ಈ ಚಿತ್ರದ ನಾಯಕ. ವಿಭಾನಟರಾಜನ್, ಅವಿನಾಶ್, ಪವಿತ್ರಾಲೋಕೇಶ್, ಸಾಧುಕೋಕಿಲಾ, ಪದ್ಮಾವಾಸಂತಿ, ಪದ್ಮಜಾರಾವ್, ಪ್ರದೀಪ್, ವಿಜಯಕುಮಾರ್, ಅಚ್ಯುತರಾವ್, ಶಂಕರರಾವ್, ಚಿದಾನಂದ್ ಈ ಚಿತ್ರದಲ್ಲಿ ಅಭಿನಯಿಸುತ್ತಿರುವ ಕಲಾವಿದರು.